Subtitle

ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನ ಕುಂಭಾಸಿ

Some description text for this item

Vision

Lorem ipsum dolor sit amet, consectetuer adipiscing elit, sed diam nonummy nibh euismod tincidunt ut laoreet dolore magna aliquam erat volutpat. Ut wisi enim ad minim veniam, quis nostrud exerci tation ullamcorper.

Mission

Ut wisi enim ad minim veniam, quis nostrud exerci tation ullamcorper. Suscipit lobortis nisl ut aliquip ex ea commodo consequat. Duis autem vel eum iriure dolor.

about us

Learn About Our
Capabilities

Phasellus et ipsum justo. Aenean fringilla a fermentum mauris non venenatis. Praesent at nulla aliquam, fermentum ligula a eget, fermentum metus. Morbi auctor sed dui et rhoncus. Lorem ipsum dolor sit amet, consectetuer elit, sed diam nonummy nibh euismod tincidunt ut laoreet dolore magna aliquam:

Meditation
80%
Teaching
70%
Yoga
95%
Inspiration
60%
ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನ ಕುಂಭಾಶಿ

ನಿತ್ಯ ನಡೆಯುವ ಪೂಜಾದಿ ಧಾರ್ಮಿಕ ಕಾರ್ಯಕ್ರಮ ಸೇವೆಗಳ ವಿವರ

Some description text for this item

ಪ್ರತಿನಿತ್ಯ ಪ್ರಾತಃ : ಕಾಲ ಬೆಳಿಗ್ಗೆ 5.00 ಕ್ಕೆ ದೇವಾಲಯದ ಪ್ರಧಾನ ಬಾಗಿಲು ಹಾಗೂ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ, ಶ್ರೀ ಮಹಾಗಣಪತಿ, ಶ್ರೀ ಶ್ರೀನಿವಾಸ ಸ್ವಾಮಿ ಸಾನಿಧ್ಯಗಳ ದ್ವಾರ ತೆಗೆದು ದರ್ಶನ

ಬೆಳಿಗ್ಗೆ 5.15 ರಿಂದ 6.30 ರ ವರೆಗೆ
ಪ್ರಾತಃ ಸೂಕ್ತ
ಭಾಗ್ಯ ಸೂಕ್ತ
ಗಣಪತಿ ಸೂಕ್ತ
ವಿಷ್ಣು ಸೂಕ್ತ
ದುರ್ಗಾ ಸೂಕ್ತ
ಸರ್ಪ ಸೂಕ್ತ
ನವಗ್ರಹ ಮಂತ್ರ
ದಶ ದಿಕ್ಕುಗಳ ನಮಸ್ಕಾರ ಮಂತ್ರ
ಜಗದ್ಗುರು, ಗುರುಗಳ ಸ್ಮರಣೆ, ಗುರು ಪರಂಪರೆ ಸ್ಮರಣೆ, ಕೃಷ್ಣಯರ್ಜುವೇದ, ಸಂಹಿತಾ, ಬ್ರಾಹ್ಮಣ, ಆರಣ್ಯಕ ಹಾಗೂ ಕ್ರಮ ಪಾರಾಯಣ. (ಕ್ರಮೇಣ ಈ ಎಲ್ಲಾ ಭಾಗಗಳ ಸಮಗ್ರ ಪಾರಾಯಣ. ಪ್ರತಿನಿತ್ಯ ಲಬ್ಧ ಸಮಯದಲ್ಲಿ.)

ಬೆಳಿಗ್ಗೆ 5.15 ರಿಂದ ಮೂರು ಸಾನಿಧ್ಯಗಳ ದೀಪ ಜ್ವಾಲನೆ.
ಪ್ರಾತರುತ್ಥಾನ ಪೂಜೆ (ನೈರ್ಮಾಲ್ಯ ಪೂಜೆ)
ಪಂಚಾಮೃತಾಭಿಷೇಕ
ಮಹಾಭಿಷೇಕ
ಮಹಾಪೂಜೆ
ಅಲಂಕಾರ ಪೂಜೆ
ಕುಂಕುಮಾರ್ಚನೆ
ನೈವೇದ್ಯ

ಬೆಳಿಗ್ಗೆ 7.30ಕ್ಕೆ ಮಹಾಗಣಪತಿಗೆ ಮಹಾ ಮಂಗಳಾರತಿ.
ಬೆಳಿಗ್ಗೆ 7.45ಕ್ಕೆ ಶ್ರೀ ಶ್ರೀನಿವಾಸನಿಗೆ ಮಹಾ ಮಂಗಳಾರತಿ.
ಬೆಳಿಗ್ಗೆ 8.00 ಕ್ಕೆ ಶ್ರೀಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರಿಗೆ ಮಹಾ ಮಂಗಳಾರತಿ, ಮಂತ್ರ ಪುಷ್ಪ, ಪ್ರಾರ್ಥನೆ, ತೀರ್ಥಪ್ರಸಾದ ವಿತರಣೆ.
ಬೆಳಿಗ್ಗೆ 8.30ಕ್ಕೆ ಪ್ರತಿನಿತ್ಯದ ಪಂಚಾಂಗ ವಾಚನ ಹಾಗೂ ಶ್ರವಣ.
ಬೆಳಿಗ್ಗೆ 7.00 ರಿಂದ ರಾತ್ರಿ 8.00 ರ ವರೆಗೆ ಭಕ್ತಾದಿಗಳಿಗೆ ಕುಂಕುಮಾರ್ಚನೆ, ಮಂಗಳಾರತಿ ಇತ್ಯಾದಿ ಸೇವೆಗಳಿಗೆ ಅವಕಾಶ.
ಬೆಳಿಗ್ಗೆ 11.15 ಕ್ಕೆ ಶ್ರೀಮಹಾಗಣಪತಿಗೆ ಮಹಾ ಪೂಜೆ, ಮಹಾ ನೈವೇದ್ಯ, ಮಹಾ ಮಂಗಳಾರತಿ, ಮಂತ್ರಪುಷ್ಪ, ಪ್ರಾರ್ಥನೆ.
ಬೆಳಿಗ್ಗೆ 11.45ಕ್ಕೆ ಶ್ರೀ ಶ್ರೀನಿವಾಸ ದೇವರಿಗೆ ಮಹಾ ಪೂಜೆ, ಮಹಾ ನೈವೇದ್ಯ, ಮಹಾ ಮಂಗಳಾರತಿ, ಮಂತ್ರ ಪುಷ್ಪ, ಪ್ರಾರ್ಥನೆ.
ಬೆಳಿಗ್ಗೆ 12.00 ರಿಂದ ಶ್ರೀಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರಿಗೆ ಮಹಾ ಪೂಜೆ, ಮಹಾ ನೈವೇದ್ಯ, ಮಹಾ ಮಂಗಳಾರತಿ, ಮಂತ್ರ ಪುಷ್ಪ, ಪ್ರಾರ್ಥನೆ, ತೀರ್ಥ ಪ್ರಸಾದ ವಿತರಣೆ.
ಮಧ್ಯಾಹ್ನ 12.45 ಕ್ಕೆ ಭಗವದ್ಗೀತಾ ಪಠಣ

ಸಾಯಂಕಾಲ 6.00 ರಿಂದ
ಗಣಪತಿ ಸ್ತುತಿ
ವಿಷ್ಣು ಸಹಸ್ರನಾಮ ಪಾರಾಯಣ
ನಾಮ ಸಂಕೀರ್ತನೆ
ಭಜನೆ: ಮಾತೆಯರಿಂದ, ಭಕ್ತಾದಿಗಳಿಂದಸಂಜೆ 6.00 ರಿಂದ ಚಂಡಿಕಾ ಪಾರಾಯಣ (ಸಪ್ತಶತೀ)
ಸಂಜೆ 7.00ಕ್ಕೆ ಶ್ರೀಮಹಾಗಣಪತಿಗೆ ಮಹಾ ಪೂಜೆ, ನೈವೇದ್ಯ, ಮಹಾ ಮಂಗಳಾರತಿ.
ಸಂಜೆ 7.45 ಕ್ಕೆ ಶ್ರೀ ಶ್ರೀನಿವಾಸ ದೇವರಿಗೆ ಮಹಾ ಪೂಜೆ, ಮಹಾ ನೈವೆದ್ಯ, ಮಹಾ ಮಂಗಳಾರತಿ.
ಸಂಜೆ 8.00 ಕ್ಕೆ ಶ್ರೀಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರಿಗೆ (ಮಹಾ ಪೂಜೆ, ಲಲಿತಾ ಸಹಸ್ರನಾಮ ಅರ್ಚನೆ, ನೈವೇದ್ಯ, ಮಹಾ ಮಂಗಳಾರತಿ, ಮಂತ್ರ ಪುಷ್ಪ, ಪ್ರಾರ್ಥನೆ, ತೀರ್ಥ ಪ್ರಸಾದ ವಿತರಣೆ. ದೇವ್ಯಪರಾಧ ಕ್ಷಮಾಪಣ ಸ್ತೊತ್ರ ಆನಂದ ಲಹರೀ ಇತ್ಯಾದಿ ಸ್ತೊತ್ರಗಳ ಪಠಣ.
ರಾತ್ರಿ ಸೂಕ್ತ ಪಠಣ ದೇವೀ ಯೋಗನಿದ್ರೆಗಾಗಿ ಪ್ರಾರ್ಥನೆ.
ರಾತ್ರಿ 9.00 ಕ್ಕೆ ಮೂರು ಸಾನಿಧ್ಯಗಳ ದರ್ಶನ ಮುಕ್ತಾಯ.

7.00 ರಿಂದ 8.00 ರ ಒಳಗೆ ಶ್ರೀ ನಾಗೇಂದ್ರ ಸ್ವಾಮಿ, ಶ್ರೀ ನಾಗಯಕ್ಷಿ, ಶ್ರೀ ಸ್ವರ್ಣಯಕ್ಷಿ ಸನ್ನಿಧಿಯಲ್ಲಿ ಕ್ಷೀರಾಭಿಷೇಕ, ಸಿಯಾಳಾಭಿಷೇಕ ಪೂರ್ವಕ ಮಹಾ ಪೂಜೆ ಮಹಾ ಮಂಗಳಾರತಿ ನಡೆಯುತ್ತದೆ.

ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು

Icon

ಚಂಡಿಕಾ ಹೋಮ (ಮೂಲ ನಕ್ಷತ್ರ)

ಪ್ರತಿ ಮಾಸದ ಮೂಲಾ ನಕ್ಷತ್ರದಂದು ಸಾನಿಧ್ಯಾಭಿವೃದ್ಧಿ ಹಾಗೂ ಲೋಕ ಕಲ್ಯಾಣಕ್ಕಾಗಿ ಶ್ರೀಚ೦ಡಿಕಾ ದುರ್ಗಾಪರಮೇಶ್ವರಿಯ “ಚ೦ಡಿಕಾ ಹೋಮ” ನೆರವೇರಿಸಲಾಗುತ್ತದೆ. ಅಂದಿನ ವಿಶೇಷ:- ಮಂಗಳವಾದ್ಯದೊ೦ದಿಗೆ ಶ್ರೀದೇವಿಯ ಉತ್ಸವ ಮೂರ್ತಿ ಯಾಗಶಾಲಾ ಪ್ರವೇಶ ಮಾಡಿ ಹೋಮಾ೦ತ್ಯದವರೆಗೆ ಯಾಗಶಾಲೆಯಲ್ಲಿಯೇ ಸಾನಿಧ್ಯ ಇದ್ದು ದರ್ಶನಕ್ಕೆ ಅವಕಾಶವಿರುತ್ತದೆ. ಸಂಜೆ ವಿಶೇಷ ದೀಪಾಲ೦ಕಾರದೊಂದಿಗೆ ರಂಗಪೂಜಿ, ಸ್ವರ್ಣಪಲ್ಲಕ್ಕಿ ಉತ್ಸವ, ಅಷ್ಮಾವಧಾನ, ಮಹಾ ಮಂಗಳಾರತಿ ತೀರ್ಥ ಪ್ರಸಾದ, ಬ್ರಹ್ಮಾಸ್ಪ ವಿತರಣೆ. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನದಾನ ಸೇವೆ ಇರುತ್ತದೆ.
ಚಂಡಿಕಾ ಹೋಮದ ಸೇವಾರ್ಥಿಗಳ ಚಂಡಿಕಾ ಹೋಮವು ಮೂಲಾ ನಕ್ಷತ್ರದ ಚಂಡಿಕಾ ಹೋಮದಂತೆಯೆ ನಡೆಯುತ್ತದೆ. ಸಾರ್ವಜನಿಕ ಅನ್ನದಾನ ಸಂಜೆ ನಡೆಯುವ ರಂಗಪೂಜೆ, ಸ್ವರ್ಣ ಪಲ್ಲಕ್ಕಿ, ಅಷ್ಟಾವಾಧಾನ ಇತ್ಯಾದಿ ಸೇವೆಗಳು. ಚಂಡಿಕಾ ಹೋಮ ಮಾಡಿಸುವ ಸೇವಾರ್ಥಿಗಳು ಅಪೇಕ್ಷಿಸಿದಲ್ಲಿ ಮಾತ್ರ)
Icon

ಶ್ರೀ ಸೂಕ್ತ ಹೋಮ (ಪ್ರತಿ ಶುಕ್ರವಾರ ಬೆಳಗ್ಗೆ)

ಮಾಸದ ಪ್ರತಿ ಶುಕ್ರವಾರದಂದು ಶ್ರೀ ಚಂಡಿಕಾ ದುರ್ಗಾಪರಮೇಶ್ವರಿಯ ದಿವ್ಯ ಅನುಗ್ರಹ, ಲೋಕ ಕಲ್ಯಾಣ ಹಾಗೂ ಸಮಸ್ತ ಭಕ್ತಾದಿಗಳ ಒಳ್ಳೆಯ ಸಂಪತ್ತು, ಅಭಿವೃದ್ಧಿಗಾಗಿ ಮಹಾಲಕ್ಷ್ಮೀಯ ಅನುಗ್ರಹ ಸಿದ್ಧಿಗಾಗಿ ಶ್ರೀ ಸೂಕ್ತ ಹೋಮ ಪ್ರಾತಃ ಕಾಲ ಆರಂಭಗೊಂಡು ಅಮ್ಮನವರ ಆ ದಿನದ ಪ್ರಾತಃ ಕಾಲದ ಮಹಾ ಪೂಜೆ, ಮಹಾ ಮಂಗಳಾರತಿಯ ಮುನ್ನಾ ಸಂಪನ್ನಗೊಳ್ಳುತ್ತದೆ. ಭಕ್ತಾದಿಗಳಿಗೆ ಮಧ್ಯಾಹ್ನ ಅನ್ನದಾನ ಸೇವೆ ಇರುತ್ತದೆ.
Icon

ನವಕುಂಭ ಸಂಪನ್ನಅಧಿವಾಸ ಹೋಮ (ಪ್ರತಿ ಸಂಕ್ರಾಂತಿ)

ಪ್ರತಿ ಸಂಕ್ರಾಂತಿಯ ದಿನದಂದು ಈ ಹೋಮ ಜರುಗುತ್ತದೆ. ಪ್ರತಿ ಸಂಕ್ರಾಂತಿಯ ಹಿಂದಿನ ದಿನ ರಾತ್ರಿ ಅರ್ಚಕರೆಲ್ಲರೂ ಸೇರಿ ಮೂರು ಗರ್ಭಗುಡಿಗಳನ್ನು ದೇವರುಗಳಿಗೆ ವಸ್ತ್ರಾಚ್ಛಾದನೆ ಮಾಡಿ ಅಂದರೆ ವಸ್ತ್ರದಿಂದ ಮುಚ್ಚಿ ಗರ್ಭಗುಡಿಗಳ ಶುಚಿತ್ವ ದೃಷ್ಟಿಯಿಂದ ಸ್ವಚ್ಚತಾ ಕಾರ್ಯವನ್ನು ಮಾಡುವುದರ ಜೊತೆಗೆ ಸಾನಿಧ್ಯದಲ್ಲಿ ಕಲಾ ಚೈತನ್ಯ ಅಧಿಕವಾಗುವುದಕ್ಕೋಸ್ಕರ ಮರುದಿನ ಅಂದರೆ ಸಂಕ್ರಾಂತಿಯಂದು ಈ ಕಾರ್ಯಕ್ರಮ ನಡೆಯುತ್ತದೆ. 9 ಕಲಶದಿಂದ ದೇವಿಗೆ ಅಭಿಷೇಕ ಹಾಗೂ ಅಧಿವಾಸ ಹೋಮ, ಮಹಾ ಪೂಜೆ, ಮಹಾಗಣಪತಿಗೆ ಕಲಶಾಭಿಷೇಕ ಮಹಾಪೂಜೆ, ಶ್ರೀನಿವಾಸನಿಗೆ ಕಲಶಾಭಿಷೇಕ ಮಹಾ ಪೂಜೆ ನಡೆಯುತ್ತದೆ.
Icon

ಷಣ್ಣಾರಿಕೇಳಿ ಗಣಹೋಮ (6 ಕಾಯಿ ಗಣಹೋಮ ) (ಚೌತಿ )

ಪ್ರತಿ ಪಕ್ಷದ ಚತುರ್ಥಿ ತಿಥಿಯಂದು ಮಹಾಗಣಪತಿಯ ಅನುಗ್ರಹಕ್ಕೊಸ್ಕರ ಹಾಗೂ ಸಮಸ್ತ ಭಕ್ತಾದಿಗಳ ಧರ್ಮಕಾರ್ಯದ ನಿರ್ವಿಘ್ನತೆಗೊಸ್ಕರ ಗಣಹೋಮ ನಡೆಯುತ್ತದೆ. ಹಾಗೂ ಪ್ರತಿ ನಿತ್ಯ 1 ಕಾಯಿಗಣ ಹೋಮ ನಡೆಯುತ್ತದೆ.
Icon

ವಿಷ್ಣುಸೂಕ್ತ ಹೋಮ (ಶ್ರವಣ ನಕ್ಷತ್ರ)

ಪ್ರತಿ ಶ್ರವಣ ನಕ್ಷತ್ರದ ದಿನದಂದು ಈ ಕಾರ್ಯಕ್ರಮ ಶ್ರೀನಿವಾಸ ಸ್ವಾಮಿಯ ಸನ್ನಿಧಿಯಲ್ಲಿ ನಡೆಯುತ್ತದೆ. ಲೋಕ ಕಲ್ಯಾಣಕ್ಕಾಗಿ ಸಮಸ್ತ ಭಕ್ತಾದಿಗಳ ಸರ್ವತೋಮುಖ ಅಭಿವೃದ್ಧಿ ,ಅಷ್ಟೈಶ್ವರ್ಯ ಪ್ರಾಪ್ತಿ, ಉದ್ಯೋಗ, ವ್ಯವಹಾರಗಳ ಉನ್ನತಿಗಾಗಿ ಈ ಹೋಮ ನಡೆಯುತ್ತದೆ.
Icon

ಆಶ್ಲೇಷಾ ಬಲಿ (ಆಶ್ಲೇಷ ನಕ್ಷತ್ರದ ದಿನ)

ಪ್ರತಿ ಆಶ್ಲೇಷಾ ನಕ್ಷತ್ರದ ದಿನದಂದು ಪ್ರಾತ:ಕಾಲ ಶ್ರೀ ಸರ್ಪಾದ್ಯಷ್ಟಕುಲ ನಾಗೇಂದ್ರ, ಶ್ರೀ ನಾಗಯಕ್ಷೀ, ಹಾಗೂ ಶ್ರೀ ಸ್ವರ್ಣಯಕ್ಷೀ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ನಡೆಯುತ್ತದೆ. ನವಕುಂಭ ಸಂಪನ್ನ, ಕಲಶಾಭಿಷೇಕ, ಅಧಿವಾಸ ಹೋಮ ನಡೆದು ನಂತರ ವಿಶೇಷವಾಗಿ ಆಶ್ಲೇಷಾ ಬಲಿ ಹಾಗೂ ಉದ್ಯಾಪನ ಹೋಮ ಮಹಾ ಪೂಜೆಗಳು ನಡೆಯುತ್ತದೆ. ಸಮಸ್ತ ಭಕ್ತರ ಸರ್ಪ ಶಾಪ, ಸರ್ಪಕೋಪ, ಸರ್ಪತಾಪ ನಿವೃತ್ತಿಗೋಸ್ಕರ ಹಾಗೂ ಸಾನಿಧ್ಯಗಳ ಪ್ರಾಕಾರ ಶುದ್ಧಿ, ಪ್ರಾಂಗಣ ಶುದ್ಧಿ ಬಿಂಬ ಶುದ್ದಿ ಹಾಗೂ ಬಿಂಬದಲ್ಲಿ ಪೂರ್ಣ ಚೈತನ್ಯಕ್ಕೊಸ್ಕರ ಈ ಕಾರ್ಯಕ್ರಮಗಳು ನಡೆಯುತ್ತದೆ. ಮಧ್ಯಾಹ್ನ ಮಹಾಮಗಳಾರತಿ, ನಂತರ ವಟು ಆರಾಧನೆ ಹಾಗು ಬ್ರಾಹ್ಮಣ ಆರಾಧನೆ ನಡೆಯುತ್ತದೆ
Icon

ಪ್ರತಿನಿತ್ಯ ವೇದ ಪಾರಾಯಣ

ಪ್ರಾತಃ ಕಾಲದಲ್ಲಿ ಆರಂಭಗೊಂಡು ತ್ರಿಕಾಲದಲ್ಲಿಯೂ ಕೃಷ್ಣಯಜು ತೈತ್ತರೀಯ ಶಾಖೆಯ ವೇದ ಪಾರಾಯಣ ನಡೆಯುತ್ತದೆ.
Icon

ಚಂಡಿಕಾ ಪಾರಾಯಣ (ಸಪ್ತಶತೀ) (ಪ್ರತಿ ದಿನ)

ಯತ್ರೈತ್ ಪಠ್ಯತೆ ಸಮ್ಯಕ್ ನಿತ್ಯಮಾಯತನೇ ಮಮಸದಾ ನ ತದ್ವಿಮೋಕ್ಷ್ಯಾಮಿ ಸಾನ್ನಿಧ್ಯಂ ತತ್ರಮೇಸ್ಥಿತಮ್”ಎಂಬ ಭಗವತಿಯ ವಾಕ್ಯದಂತೆ “ ಎಲ್ಲಿ ಚಂಡಿಕಾ ಪಾರಾಯಣ ಅಂದರೆ ಸಪ್ತಶತೀ ಪಾರಾಯಣ ನಿತ್ಯವೂ ನಡೆಯುವುದೋ, ಅಲ್ಲಿ ಭಕ್ತಾನುಗ್ರಹದಾಯಿನಿಯಾಗಿ ಸಾನ್ನಿಧ್ಯಗೊಂಡು ಯಾವಾಗಲೂ ಅನುಗ್ರಹಿಸುತ್ತೇನೆ” ಎನ್ನುವುದಾಗಿ “ ಶ್ರುತಂ ಹರತಿ ಪಾಪಾನಿ ತಥಾರೋಗ್ಯಂ ಪ್ರಯಚ್ಛತಿ” ಎಂಬ ತಾಯಿಯ ಮಾತಿನಂತೆ ಪ್ರತಿ ನಿತ್ಯದ ಚಂಡಿಕಾ ಪಾರಾಯಣ ಶ್ರವಣ ಮಾಡಿ ಭಕ್ತಾದಿಗಳೆಲ್ಲರೂ ಪಾಪ ರಹಿತರಾಗಿ ಸದಾರೋಗ್ಯ ಭಾಗ್ಯವನ್ನು ಪಡೆದು ಪುಣ್ಯವಂತರಾಗುತ್ತಾರೆ. ಚಂಡಿಕಾ ದುರ್ಗಾಪರಮೇಶ್ವರಿಯ ಸನ್ನಿಧಿಯಲ್ಲಿ ಪ್ರತಿದಿನವೂ ಚಂಡಿಕಾ ಪಾರಾಯಣ ಅವಿಚ್ಛಿನ್ನವಾಗಿ ನಡೆಯುತ್ತದೆ.ಭಕ್ತರಿಗೆ ಬೇಕಾದಲ್ಲಿ ಸಂಪುಟಿ ಪಾರಾಯಣ ಸೇವೆಯನ್ನು ಮಾಡಲಾಗುವುದು • ಪ್ರತಿನಿತ್ಯವೂ ಪ್ರಾತಃ ಕಾಲ ಪಂಚಾಂಗ ಪಠನ, ಶ್ರವಣ“ತಿಥೇಶ್ಚೈವರ್ಯಮವಾಪ್ನೋತಿ ವಾರಾದಾಯುಷ್ಯ ವರ್ಧನಮ್ನಕ್ಷತ್ರಾ ಧ್ಧರತೇ ಪಾಪಂ ಯೋಗಾದ್ರೊಗ ನಿವಾರಣಮ್ಕರಣಾತ್ಕಾರ್ಯ ಸಿದ್ಧಿಶ್ಚ ಪಂಚಾಗ ಫಲಮುತ್ತಮಮ್ಪಂಚಾಂಗ ಅಂದರೆ ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಪ್ರತಿ ನಿತ್ಯವು ಇವುಗಳ ಶ್ರವಣ, ಪಠನದಿಂದ, ತಿಥಿಯಿಂದ ಐಶ್ವರ್ಯ ಪ್ರಾಪ್ತಿ, ವಾರದಿಂದ ಆಯಸ್ಸು ವರ್ಧನೆ, ನಕ್ಷತ್ರದಿಂದ ಪಾಪನಾಶ, ಯೋಗದಿಂದ ರೋಗ ನಿವಾರಣೆ, ಕರಣದಿಂದ ಕಾರ್ಯಸಿದ್ಧಿ ಎಂಬ ಶುಭಫಲಗಳು ಪ್ರಾಪ್ತಿಯಾಗುತ್ತದೆ. ಪ್ರತಿ ನಿತ್ಯವು ಪ್ರಾತಃ ಕಾಲದ ಮಹಾಪೂಜೆಯ ನಂತರ ಪಂಚಾಂಗ ಪಠನ, ಶ್ರವಣ ನಡೆಯುತ್ತದೆ.
Icon

ಶ್ರೀಮದ್ಭಗವದ್ಗೀತಾ ಪಠನ (ಪ್ರತಿ ದಿನ)

ಪ್ರತಿ ನಿತ್ಯ ಮಧ್ಯಾಹ್ನದ ಮಹಾ ಪೂಜೆ, ತೀರ್ಥಪ್ರಸಾದ ವಿತರಣೆಯ ನಂತರ ಭಗವದ್ಗೀತೆಯ ಪಠನ ನಡೆಯುವುದು ಪ್ರತಿ ನಿತ್ಯಗೀತಾ ಪಠಣ ಶ್ರವಣದಿಂದ ಪುಣ್ಯಪ್ರಾಪ್ತಿ, ಪಾಪನಾಶ, ದುಃಖನಾಶ, ಆಪತ್ತುನಾಶ, ಸದಾರೋಗ್ಯ, ಧನ ಪ್ರಾಪ್ತಿಯನ್ನು ಪಡೆದು ಘೋರ ನರಕ ಪಡೆಯದೇ ಗೀತಾಚಾರ್ಯನಾದ ಭಗವಂತ ಶ್ರೀಕೃಷ್ಣ ಪರಮಾತ್ಮನ ದಿವ್ಯಸಾಯುಜ್ಯವನ್ನು ಪಡೆಯಬಹುದು.
Icon

ದೇವಿ ಸ್ತೊತ್ರ ಪಾರಾಯಣ

ಪ್ರತಿದಿನ ರಾತ್ರಿ ಮಹಾಮಂಗಳಾರತಿಯ ನಂತರ ಈ ಸ್ತೊತ್ರ ಪಾರಾಯಣ ನಡೆಯುತ್ತದೆ. ದೇವ್ಯಪರಾಧ ಕ್ಷಮಾಪಣ ಸ್ತೊತ್ರ, ಆನಂದ ಲಹರೀಸ್ತೊತ್ರ, ಶಾರದಾ ಭುಜಂಗಸ್ತೊತ್ರ ಪಾರಾಯಣಗಳು ನಡೆಯುತ್ತದೆ. ಸ್ತೊತ್ರಗಳ ಪಠನ, ಶ್ರವಣದಿಂದ ಪಾಪನಾಶವಾಗಿ, ಪುಣ್ಯ ಪ್ರಾಪ್ತಿಯಾಗಿ ಜಗನ್ಮಾತೆಯ ದಿವ್ಯ ಅನುಗ್ರಹವಾಗುತ್ತದೆ.
Icon

ಸಾಮೂಹಿಕ ಸತ್ಯನಾರಾಯಣ ವ್ರತ ಕಥೆ, ಪೂಜೆ (ಪ್ರತಿ ಹುಣ್ಣಿಮೆ)

ಪ್ರತಿ ಮಾಸದ ಹುಣ್ಣಿಮೆಯಂದು ಸಾಯಂಕಾಲ ಈ ಕೈಂಕರ್ಯವು ನಡೆಯುತ್ತದೆ. ಕಲಿಯುಗದಲ್ಲಿ ಶ್ರೇಷ್ಠವಾದ ವ್ರತವನ್ನು ಮಾಡಿಸಿ, ಕಥಾಶ್ರವಣ, ಸಪಾದ ಭಕ್ಷ್ಯ ಸೇವಿಸಿ ವ್ರತದ ಸಂಪೂರ್ಣ ಫಲವನ್ನು ಭಕ್ತಾದಿಗಳು ಪಡೆಯುತ್ತಾರೆ. ಲೋಕ ಕಲ್ಯಾಣದ ಜೊತೆಗೆ ಭಕ್ತರು, ತಮ್ಮ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಕ್ರತಾರ್ಥರಾಗುತ್ತಾರೆ.ಭಕ್ತರಿಗೆ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಲು ಅವಕಾಶವಿದೆ